ಬೆಂಗಳೂರು, ಜೂನ್ 13: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ರಾಷ್ಟ್ರೋತ್ಥಾನದ 10 ಯೋಗಕೇಂದ್ರಗಳಲ್ಲಿ (ಜಯನಗರ, ಆರ್ಬಿಐ ಲೇಔಟ್, ಕಾಮಾಕ್ಷಿಪಾಳ್ಯ, ಕೋಣನಕುಂಟೆ, ನಾಗರಭಾವಿ, ಕೆ.ಜಿ. ನಗರ, ಗಾಯತ್ರಿನಗರ, ಸದಾಶಿವನಗರ, ಕಲ್ಯಾಣನಗರ ಹಾಗೂ ಕುಂದಲಹಳ್ಳಿ) ವಾಕಥಾನ್-ಅನ್ನು ಆಯೋಜಿಸಲಾಗಿತ್ತು.
ಪಾಲ್ಗೊಂಡ ಗಣ್ಯಮಾನ್ಯರು:
- ಜಯನಗರ – ಶ್ರೀ ರಾಜೇಶ್ ಪದ್ಮಾರ್, ಸಾಮಾಜಿಕ ಕಾರ್ಯಕರ್ತರು
- ಕಾಮಾಕ್ಷಿಪಾಳ್ಯ – ಶ್ರೀ ಪುನೀತ್ ರಾಜ್, ಸಾಮಾಜಿಕ ಕಾರ್ಯಕರ್ತರು
- ಕುಂದಲಹಳ್ಳಿ – ಡಾ. ಗೀತಾಂಜಲಿ, ಶ್ರೀ ಸತ್ಯಸಾಯಿ ಆಸ್ಪತ್ರೆ, ವೈಟ್ಫೀಲ್ಡ್
- ಕೆ.ಜಿ. ನಗರ – ಡಾ. ವಿ. ಬಿ. ಆರತಿ, ಖ್ಯಾತ ವಿದ್ವಾಂಸೆ, ಲೇಖಕಿ ಹಾಗೂ ಶಿಕ್ಷಣತಜ್ಞೆ
- ಗಾಯತ್ರಿನಗರ – ಶ್ರೀ ಸಾಯಿ ವೆಂಕಟೇಶ್
- ಸದಾಶಿವನಗರ – ಶ್ರೀ ಗಂಗಾಧರ್, ನಿವೃತ್ತ ಎಸ್. ಪಿ.
